ಮೌನ ರೋದನ

ಬೇಯುತಿದೆ ಮಾತಿಯೊಡಲು
ಸುಡುವ ಕಿಚ್ಚಿನೊಳಗೆ
ಮೌನ ಚಿಪ್ಪಿನಂತೆ
ಪ್ರತಿಭಟನೆಯ ಸೋಲಿಲ್ಲ

ಮರದಿಂದ ಮರಕ್ಕೆ ಹಾರುವ
ಮರ್ಕಟನ ತೆರೆದಿ
ಪಕ್ಷದಿಂದ ಪಕ್ಷಕ್ಕೆ
ಖಾದಿಗಳ ಹಾರಾಟ
ಸನ್ನಿವೇಶಕ್ಕೆ ತಕ್ಕಂತೆ
ಬದಲಾದ ಊರಸರವಳ್ಳಿಗಳ ವೇಷ
ಬಾಂಧವ್ಯ ಬೆಸೆಯುವಲ್ಲಿ
ಕಾಣುವುದು ಮೀನಮೇಷ

ಮಂಗನ ಕೈಯ ಮಾಣಿಕ್ಯದಂತೆ
ಮೌಲ್ಯ ರಹಿತವಿಂದು
ಸನಾತನ ಭಾರತ
ವೇದಾಂತ ಸಿರಿಯ ಹೊಂಬೆಳಕು
ಮಸುಕಾಗಿ ವಿಜ್ರಂಭಿಸಿದೆ
ನೀಲಿಚಿತ್ರಗಳ ಕರಿ ಬೆಳಕು

ಹಣಕ್ಕಾಗಿ ಉರುಳಿದ ಹೆಣ
ಧನದ ಮುಂದೆ ದೀನರಾದ ಜನ
ರಾಜಕೀಯ ಡೊಂಬರಾಟ
ಪಾಶವೀಕೃತ್ಯಗಳ ಕೂಟ
ಸನಾತನ ಧರ್ಮದ ಒಡಲು
ಇಂದು ದುರ್ನಾತ ಬೀರುವ ಕಡಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಕ್ಕಳಿಸಿ ಅಳದಿರಲಿ…. ಪ್ರೀತಿ
Next post ಕಪ್ಪು ಬಿಳುಪು

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys